ವಿಟ್ಲ: ವಿವಾಹಿತ ಮಹಿಳೆ ಪೇಟೆಗೆಂದು ಹೋದವರು ಹಿಂತಿರುಗಿ ಬಾರದೇ ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಟ್ಲ ಪಡ್ನೂರು ಗ್ರಾಮದ ಕಡಂಬು ನಿವಾಸಿ ನಾಗೇಶ್ ಅವರ ಪತ್ನಿ ಕವಿತಾ(29) ನಾಪತ್ತೆಯಾದ ಮಹಿಳೆ.
ಕವಿತಾ ಮಂಗಳೂರು ರಸ್ತೆಯಲ್ಲಿರುವ ಎನ್. ಆರ್. ಭಟ್ ಸ್ವೀಟ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಬೆಳಿಗ್ಗೆ ಕೆಲಸಕ್ಕೆಂದು ಹೋಗುವಾಗ ಪತಿಯಲ್ಲಿ ತಾಯಿ ಮನೆಗೆ ಹೋಗುತ್ತೇನೆ ಎಂದು ತಿಳಿಸಿದ್ದಳು. ಸಂಜೆ ಕೆಲಸ ಮಾಡುವ ಬೇಕರಿಯಿಂದ ತಾಯಿ ಮನೆಗೆ ಹೋಗುತ್ತೇನೆಂದು ಆಕೆಯ ಜೊತೆ ಕೆಲಸ ಮಾಡುವವರಲ್ಲಿ ಹೇಳಿ ಹೋಗಿದ್ದು ರಾತ್ರಿಯಾದರೂ ಆಕೆಯು ತಾಯಿ ಮನೆಗೆ ಮುಟ್ಟಿರುವುದಿಲ್ಲವೆಂದು ಆಕೆಯ ಸಹೋದರ ಗಿರೀಶ್ ಆಕೆಯ ಮೊಬೈಲ್ ಗೆ ಪೋನ್ ಮಾಡಲಾಗಿ ಪೋನ್ ಸ್ವಿಚ್ ಆಪ್ ಆಗಿತ್ತು. ಬಳಿಕ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿಲ್ಲ. ಈ ಬಗ್ಗೆ ಪತಿ
ನಾಗೇಶ್ ಅವರು ದೂರು ನೀಡಿದ್ದಾರೆ.