ಬೆಂಗಳೂರು : ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಅವರ ಸುಪುತ್ರಿ ಹವ್ವಾ ನಸೀಮಾ ತನ್ನ ಮಂಗಳೂರು ಸಂತ ಅಲೋಷಿಯಸ್ ಕಾಲೇಜಿನ ದ್ವಿತೀಯ ವರ್ಷದ ಬಿ.ಎ ರಸಾಯನಶಾಸ್ತ್ರ ಮತ್ತು ಪತ್ರಿಕೋದ್ಯಮ ವಿಭಾಗದ ಸಹಪಾಠಿಗಳ ಜೊತೆಗೆ ಬೆಂಗಳೂರಿನ ವಿಧಾನಸೌಧದಲ್ಲಿ ತಂದೆಯ ಕಲಾಪವನ್ನು ವೀಕ್ಷಿಸುವುದರ ಜೊತೆಗೆ ವಿಧಾನಸೌಧ ಹಾಗೂ ಕಲಾಪಗಳ ಮಹತ್ವದ ಮಾಹಿತಿಯನ್ನು ಅಧಿಕಾರಿಗಳೊಂದಿಗೆ ಪಡೆದುಕೊಂಡರು.
ಒಟ್ಟು 38 ವಿದ್ಯಾರ್ಥಿಗಳು ಹಾಗೂ ಇಬ್ಬರು ಉಪನ್ಯಾಸಕರು ಭಾಗಿಯಾಗಿದ್ದರು.