ಮಂಗಳೂರು, ಫೆ.24: ಇಲ್ಲಿನ ಕೋಟೆಕಾರು ಬಳಿಯ ಪಿಜಿಯಲ್ಲಿದ್ದ ಪಿಹೆಚ್ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ವಾರದ ಹಿಂದೆ ನಾಪತ್ತೆಯಾಗಿದ್ದು, ಇದವರೆಗೆ ಪತ್ತೆಯಾಗಿಲ್ಲ. ಈ ನಡುವೆ, ಚೈತ್ರಾ ನಾಪತ್ತೆ ಪ್ರಕರಣದ ಹಿಂದೆ ಲವ್ ಜಿಹಾದ್ (Love Jihad) ಆರೋಪ ಕೇಳಿಬಂದಿದೆ. ಚೈತ್ರಾ ತಂಗಿದ್ದ ಪಿಜಿಗೆ ಬರುತ್ತಿದ್ದ ಬಂಟ್ವಾಳ ಮೂಲದ ಪುತ್ತೂರು ನಿವಾಸಿಯಾಗಿರುವ ಅನ್ಯಕೋಮಿನ ಯುವಕ ಗಾಂಜಾ ರುಚಿ ತೋರಿಸಿ ಯುವತಿಯನ್ನು ಕರೆದೊಯ್ದ ಅನುಮಾನ ವ್ಯಕ್ತವಾಗಿದೆ.

ಚೈತ್ರಾ ನಾಪತ್ತೆ ಹಿಂದೆ ಹಿಂದೆ ಬಂಟ್ವಾಳದ ಅನ್ಯಕೋಮಿನ ಯುವಕನ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಮೂಲತಃ ಬಂಟ್ವಾಳದ ನೇರಳಕಟ್ಟೆಯ ನಿವಾಸಿ ಹಾಗೂ ಪುತ್ತೂರಿನ ಕೂರ್ನಡ್ಕದಲ್ಲಿ ವಾಸವಿದ್ದ ಯುವಕ ಚೈತ್ರಾಳಿಗೆ ಗಾಂಜಾ ರುಚಿ ತೋರಿಸಿ ಕರೆದೊಯ್ದ ಅನುಮಾನ ವ್ಯಕ್ತವಾಗಿದೆ.

ಚೈತ್ರಾ ತಂಗಿದ್ದ ಪಿಜಿಗೆ ಶಂಕಿತ ಯುವಕ ಬರುತ್ತಿದ್ದ ಬಗ್ಗೆ ಚೈತ್ರಾಳ ಮನೆಯವರಿಗೆ ಮಾಡೂರು ಬಜರಂಗದಳದ ಕಾರ್ಯಕರ್ತರು ಮಾಹಿತಿ ನೀಡಿದ್ದರು. ಮಾಹಿತಿ ನೀಡಿದ ಬಳಿಕ ಚೈತ್ರಾ ಹೆಬ್ಬಾರ್‌ ನಾಪತ್ತೆಯಾಗಿದ್ದಳು. ತಂದೆ ನಿಧನದ ನಂತರ ತನ್ನ ಆರೈಕೆಯಲ್ಲಿ ಚೈತ್ರಾ ಇದ್ದ ಹಿನ್ನೆಲೆ ಆಕೆಯ ದೊಡ್ಡಪ್ಪ ಪೊಲೀಸ್ ಠಾಣೆಗೆ ದೂರು ನಿಡಿದ್ದರು.

ಪೊಲೀಸರಿಗೆ ದೂರು ನೀಡಿ ಒಂದು ವಾರವಾದರೂ ಚೈತ್ರಾ ಪತ್ತೆಯಾಗಿಲ್ಲ. ಇನ್ನೆರಡು ದಿನಗಳಲ್ಲಿ ಪತ್ತೆಯಾಗದೇ ಇದ್ದಲ್ಲಿ ಉಳ್ಳಾಲ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಬಜರಂಗದಳ ಕರ್ನಾಟಕ ಪ್ರಾಂತ ಸಂಚಾಲಕ ಮುರಳಿ ಕೃಷ್ಣ ಹಸಂತಡ್ಕ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರು ಹೊರವಲಯದ ದೇರಳಕಟ್ಟೆಯ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಎಂಎಸ್​ಸಿ ಮುಗಿಸಿದ ನಂತರ ಚೈತ್ರಾ ಕೋಟೆಕಾರು ಬಳಿಯ ಖಾಸಗಿ ಪಿಜಿಯಲ್ಲಿ ಇದ್ದುಕೊಂಡು ಫುಡ್ ಸೆಕ್ಯುರಿಟಿ ವಿಷಯದ ಮೇಲೆ ಪಿಹೆಚ್​ಡಿ ಅಧ್ಯಯನ ಮಾಡುತ್ತಿದ್ದಳು. ಫೆ.17 ರಂದು ಬೆಳಗ್ಗೆ 9 ಗಂಟೆಗೆ ಪಿಜಿಯಿಂದ ತನ್ನ ಸ್ಕೂಟರಲ್ಲಿ ತೆರಳಿದ್ದಾಕೆ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ದೊಡ್ಡಪ್ಪ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

By admin

Leave a Reply

Your email address will not be published. Required fields are marked *

error: Content is protected !!