ಸುಳ್ಯ :ಇಸ್ರೋ ಸಂಸ್ಥೆಯ ಮಹತ್ವದ ಚಂದ್ರಯಾನ-3 ಯಶಸ್ವಿಯಾಗಿದ್ದು, ಈ ಯಶಸ್ಸಿನಲ್ಲಿ ಸುಳ್ಯ ದುಗಲಡ್ಕದ ಮಾನಸ ಜಯಕುಮಾರ್ ರವರು ಕೂಡಾ ಪಾಲು ಪಡೆದಿದ್ದಾರೆ. ಮಾನಸ ಅವರು ಮಂಗಳೂರು ವಿವಿ ಯಲ್ಲಿ ಮಂಗಳಗ್ರಹದ ವಿಚಾರವಾಗಿ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದಾರೆ.
ಶುಕ್ರಗ್ರಹದ ಕುರಿತು ಸಂಶೋಧನೆಯನ್ನು ಈಗಾಗಲೇ ಪೂರ್ತಿಗೊಳಿಸಿದ್ದಾರೆ.ಮಾರ್ಚ್ ತಿಂಗಳಲ್ಲಿ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದ ಚಂದ್ರಯಾನ – 3 ವಿಚಾರದಲ್ಲಿ ಪ್ರಾಜೆಕ್ಟ್ ವರ್ಕ್ ಶಾಪ್ ನಲ್ಲಿ ಕರ್ನಾಟಕದಿಂದ ಆಯ್ಕೆಯಾಗಿ ಭಾಗವಹಿಸಿದ್ದರು.ಚಂದ್ರಯಾನ -3 ಉಪಗ್ರಹದ ಆ್ಯಂಟನಾ ತಯಾರಿಕೆಯ 5 ಜನರ ತಂಡದಲ್ಲಿ ಮಾನಸ ಕೂಡಾ ಒಬ್ಬರಾಗಿದ್ದರು. ಇದೇ ಸಂದರ್ಭದಲ್ಲಿ ಆದಿತ್ಯ ಎ 1 ಹಾಗೂ ಶುಕ್ರಯಾನ ದ ಕುರಿತು ತಿಳಿಸಲಾಗಿತ್ತು.
ಮಂಡೆಕೋಲು ಗ್ರಾಮದ ಜಾಲಬಾಗಿಲು ಬಾಲಕೃಷ್ಣ – ಕುಸುಮಾವತಿ ದಂಪತಿಯ ಪುತ್ರಿಯಾಗಿರುವ ಮಾನಸ, ಸುಳ್ಯ ದುಗಲಡ್ಕ ಜಯಕುಮಾರ್ ಬಿ.ಎಸ್. ರವರ ಪತ್ನಿ.‌ ಜಯಕುಮಾರ್ ರವರು ಮಂಗಳೂರು‌ ವಿವಿ ಯಲ್ಲಿ‌ ಕಂಪ್ಯೂಟರ್ ವಿಭಾಗದಲ್ಲಿ ಉದ್ಯೋಗಿಯಾಗಿದ್ದಾರೆ. ಇವರ ಮಗಳು ಸನ್ನಿಧಿ ಯೊಂದಿಗೆ ಮಂಗಳೂರಿನಲ್ಲಿ ನೆಲೆಸಿದ್ದಾರೆ

By admin

Leave a Reply

Your email address will not be published. Required fields are marked *

error: Content is protected !!