ಬೆಂಗಳೂರು: ವಿಧವೆಯ ಬಾಳಲ್ಲಿ ಖತರ್ನಾಕ್ ಖದೀಮನೊಬ್ಬ ಚೆಲ್ಲಾಟವಾಡಿದ್ದಾನೆ. ‘ಉಂಡು ಹೋದ ಕೊಂಡು ಹೋದ’ ಅನ್ನೋ ಗಾದೆ ಮಾತಿನಂತೆ ಬಾಳು ನೀಡುತ್ತೇನೆಂದು ಬಣ್ಣ ಬಣ್ಣದ ಮಾತುಗಳನ್ನಾಡಿ ಮೋಸ ಮಾಡಿ ಎಸ್ಕೇಪ್ ಆಗಿದ್ದಾನೆ.

ಹೌದು, ಮದುವೆ ಆಗುತ್ತೇನೆ ಅಂತಾ ನಂಬಿಸಿ ಬಂದ ಕಳ್ಳನೊಬ್ಬ ವಿಧವೆ ಬಾಳಲ್ಲಿ ಚೆಲ್ಲಾಟವಾಡಿದ್ದಾನೆ.

‘ಉಂಡು ಹೋದ. ಚಿನ್ನದ ಒಡೆವೆ ಕದ್ದುಕೊಂಡು ಹೋದ’ ಅನ್ನೋ ರೀತಿ ಮೋಸ ಮಾಡಿ ಪರಾರಿಯಾಗಿದ್ದಾನೆ. ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಈ ಘಟನೆ ನಡೆದಿದೆ.

ಪ್ರದೀಪ್ ಎಂಬಾತನಿಂದ ಪ್ರಿಯತಮೆ ಮಹಿಳೆ ಮನೆಯಲ್ಲಿ ಕಳ್ಳತನವಾಗಿದೆ. ವಿಧವೆಗೆ ಬಾಳು ಕೊಡುತ್ತೇನೆಂದು ಹೇಳಿದ್ದ ಈತ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾನೆ.

ಮಹಿಳೆಯ ಪತಿ ತೀರಿಹೋಗಿದ್ದು, ಹೆಣ್ಣು ಮಗು ಜೊತೆಗೆ ವಾಸವಿದ್ದಳು. ಆಗ ಪರಿಚಯ ಆಗಿ ವಿವಾಹಿತ ಪ್ರದೀಪ್ ಆಕೆಯ ಮನೆ ಸೇರಿಕೊಂಡಿದ್ದ. ‘ನನಗೆ ಮದುವೆ ಆಗಿಲ್ಲ..ನಿನ್ನೇ ಪ್ರೀತಿಸುವೆ’ ಎಂದು ಆಕೆಯ ಮನೆಯಲ್ಲೇ ಉಳಿದುಕೊಂಡಿದ್ದ. ನಿನ್ನನ್ನೇ ಮದುವೆ ಆಗುತ್ತೇನೆಂದು ಮಹಿಳೆಯನ್ನು ಆರೋಪಿ ನಂಬಿಸಿದ್ದ.

ನಂತರ ಮಹಿಳೆಯ ಮನೆಯಲ್ಲಿದ್ದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾನೆ. ಖತರ್ನಾಕ್ ಖದೀಮನ ಬಣ್ಣ ಬಣ್ಣದ ಮಾತುಗಳಿಗೆ ಮನಸೋತಿದ್ದ ನೊಂದ ಮಹಿಳೆ ತನಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸಬೇಕೆಂದು ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಆರೋಪಿ ಪ್ರದೀಪ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!