ಕುಂಬ್ಡಾಜೆ: ವಿದ್ಯಾರ್ಥಿಯ ಮೃತದೇಹ ಮನೆಯೊಳಗೆ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಾರ್ಪನಡ್ಕ ಪದ್ಮಾರ್ ನಿವಾಸಿ ಹೋಟೆಲು ಕಾರ್ಮಿಕ ಜನಾರ್ಧನರ ಪುತ್ರ ನಿತಿನ್(17) ನ ಮೃತದೇಹ ನಿನ್ನೆ ಸಂಜೆ ಮನೆಯೊಳಗೆ ಪತ್ತೆಯಾಗಿದೆ. ತಂದೆ ಜನಾರ್ಧನ ಹೋಟೆಲು ಕೆಲಸಕ್ಕೆ ಹೋಗಿದ್ದು ಅವರ ಮತ್ತೋರ್ವ ಪುತ್ರ ಜಿತಿನ್ ಮಂಗಳೂರಿನಲ್ಲಿ ಕಲಿಯುತ್ತಿದ್ದಾರೆ. ನಿನ್ನೆ ಸಂಜೆ 7.30 ರ ವೇಳೆ ತಾಯಿ ಪ್ರಸನ್ನ ದೇವಸ್ಥಾನಕ್ಕೆ ಹೋಗಿ ರಾತ್ರಿ ಹಿಂತಿರುಗಿದಾಗ ಮನೆಯ ಬಾಗಿಲು ಒಳಗಿನಿಂದ ಹಾಕಿತ್ತು. ನಿತಿನ್ ಬಾಗಿಲು ತೆರೆಯದೇ ಇದ್ದು ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ ನೇಣು ಬಿಗಿದಿರುವುದು ಕಂಡು ಬಂತು.ಕೂಡಲೇ ಬದಿಯಡ್ಕ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪ್ಲಸ್ ಟೂ ಕಳೆದ ನಂತರ ನಿತಿನ್ ಐಟಿಐ ಗೆ ಸೇರಿದ್ದನು. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.