ಮಂಗಳೂರು: ನನ್ನ ಕೊಲೆಗೆ ಸಂಚು ರೂಪಿಸಲಾಗಿದೆ, ಸಿಸಿಬಿ ಪೊಲೀಸ್‌ ಎಂದು ಹೇಳಿ ಕೆಲ ಹಿಂದೂಗಳೇ ಬಂದು ನನ್ನ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ ಎಂದು ಸ್ವತಃ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್‌ ಪವಿತ್ರನ್‌ ಆರೋಪಿಸಿದ್ದಾರೆ.

ಈ ಬಗ್ಗೆ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜೇಶ್‌ ಪವಿತ್ರನ್‌ ಅವರ ಮಾಜಿ ಕಾರು ಚಾಲಕ ಸುರತ್ಕಲ್‌ನ ಮುಕ್ಕ ನಿವಾಸಿ ಕಿರಣ್‌ ಮನೆಗೆ ಆ.17 ರಂದು ರಾತ್ರಿ 9 ಗಂಟೆಗೆ 5 ಜನ ಅಪರಿಚಿತರು ಬಂದು ರಾಜೇಶ್‌ ಪವಿತ್ರನ್‌ ಅವರ ಚಲನ, ವಲನ, ವಹಿವಾಟು ಬಗ್ಗೆ ವಿಚಾರಿಸಿದ್ದಾರೆ.

ಆಗ ನೀವು ಯಾರೆಂದು ಕೇಳಿದಾಗ ನಾವು ಸಿಸಿಬಿ ಪೊಲೀಸರು ಎಂದು ಹೇಳಿ ಬಂದೂಕು ತೋರಿಸಿ ಯಾರ ಬಳಿಯೂ ಹೇಳದಂತೆ ತಾಕೀತು ಮಾಡಿದ್ದಾರೆ. ಈ ಬಗ್ಗೆ ತಕ್ಷಣ ಸುರತ್ಕಲ್‌ ಪೊಲೀಸ್‌ ಠಾಣೆ ಹಾಗೂ ಮಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ. ಆ ರಾತ್ರಿ ಕಿರಣ್‌ ಮನೆಗೆ ಬಂದವರು ಹಿಂದೂಗಳೇ ಎಂದು ನನಗೆ ಖಚಿತ ಮಾಹಿತಿ ಬಂದಿದೆ.

ಇದು ನಮಗೆ ನಿಜವಾಗಿ ನೋವಾಗಿದೆ. ಬಿಜೆಪಿ ಸರಕಾರದಡಿ ಹಿಂದೂ ನಾಯಕರಿಗೆ ಪ್ರಾಮುಖ್ಯತೆ ಇಲ್ಲ. ಮುತಾಲಿಕ್‌ ಸೇರಿ ಹಲವರಿಗೆ ನೀಡಿದ ಭದ್ರತೆ ಬಿಜೆಪಿ ಹಿಂತೆಗೆದುಕೊಂಡಿದೆ ಎಂದು ಆರೋಪಿಸಿದ ಅವರು. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಎಂದು ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ಕೊಡಿ ಎಂದು ಹೇಳಿದ ಅವರು ಎಲ್ಲವೂ ಆದ ಮೇಲೆ ಶಾಂತಿ ಮಾತುಕತೆ ಬೇಡ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ನಾಯಕರಾದ ಧರ್ಮೇಂದ್ರ ಸೇರಿ ಹಲವರಿದ್ದರು.

By admin

Leave a Reply

Your email address will not be published. Required fields are marked *

error: Content is protected !!