ಮಂಗಳೂರು ನಗರ ಹೊರವಲಯದ ಸುರತ್ಕಲ್ನಲ್ಲಿ ನಡೆದ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವಶಕ್ಕೆ ಪಡೆದಿರುವ ಕಾರು ಮಾಲಕನಿಂದ ಪೊಲೀಸರಿಗೆ ಮಹತ್ವದ ಸುಳಿವು ಲಭಿಸಿದ್ದು, ಲೋಕೇಶ್ ಕೋಡಿಕೆರೆ ಗ್ಯಾಂಗ್ನಿಂದ ಈ ಕೃತ್ಯ ನಡೆದಿದೆ ಎಂಬ ಅಂಶ ಬಯಲಿದೆ ಬಂದಿದೆ.
ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಲೊಕೇಶ್ ಕೋಡಿಕೆರೆಯ ಗ್ಯಾಂಗ್ನಿಂದ ಈ ಕೃತ್ಯ ನಡೆದಿದೆ ಎಂಬುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಜೊತೆಗೆ ಈ ಗ್ಯಾಂಗ್ನಿಂದ ಮೋಹನ್, ಸುಹಾನ್ ಎಂಬವರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಅಂಶ ಬಯಲಾಗಿದೆ.
ಕೋಡಿಕೆರೆ ಲೋಕಿಯ ಗ್ಯಾಂಗ್ ಈ ಹಿಂದೆ ಹಲವು ದುಷ್ಕೃತ್ಯಗಳಲ್ಲಿ ಭಾಗಿಯಾಗಿದ್ದರು. ಈ ಕೃತ್ಯದಲ್ಲಿ ಲೋಕಿ ನೇರವಾಗಿ ಭಾಗಿಯಾಗದಿದ್ದರೂ ಆತನ ಸಹಚರರಿಂದ ಮಾಡಿಸಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಇನ್ನಷ್ಟೇ ಅಧಿಕೃತ ಹೇಳಿಕೆ ನೀಡಬೇಕಾಗಿದೆ.
ಮೂಲತಃ ಉಡುಪಿಯವನಾಗಿದ್ದ ಅನಿಲ್ ಡಿ’ಸೋಜ ಸುರತ್ಕಲ್ನ ಕಾನದಲ್ಲಿ ವಾಸ್ತವ್ಯ ಹೂಡಿದ್ದು, ಈತ ತನ್ನ ಖಾಸಗಿ ಕಾರುಗಳನ್ನು ದಿನ ಲೆಕ್ಕದಲ್ಲಿ ಬಾಡಿಗೆ ಕೊಡುತ್ತಿದ್ದ, ಎಂದಿನಂತೆ ದುಷ್ಕರ್ಮಿಗಳು ಈ ಕಾರು ಬಾಡಿಗೆ ಪಡೆದು ಕೊಲೆಗೈದು ಉಡುಪಿಯಲ್ಲಿ ಬಿಟ್ಟು ಬೇರೆಡೆಗೆ ಪರಾರಿಯಾಗಿದ್ದಾರೆ.