ಬೆಂಗಳೂರು, ಕರಾವಳಿಯಿಂದ ಆಯ್ಕೆಯಾಗಿರುವ ಹಿರಿಯ ಶಾಸಕ ಯು.ಟಿ, ಖಾದರ್ ಅವರು ವಿಧಾನಸಭೆಯ ಸ್ಪೀಕರ್ ಆಗಿ ನೇಮಕಗೊಂಡಿದ್ದಾರೆ. ಈ ನಡುವೆ ವಿಧಾನಸಭೆಯಲ್ಲಿ ಅವರಿಗೆ ಅಭಿನಂದನೆ ಸಲ್ಲಿಸುವ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸುನೀಲ್ ಕುಮಾರ್ ಅವರು, ಯು.ಟಿ. ಖಾದರ್ ಅವರಿಗೆ ಪ್ರಚಾರ ತೆಗೆದುಕೊಳ್ಳುವುದು ಹೇಗೆ ಎಂಬುವುದು ಗೊತ್ತು. ಅದನ್ನು ನಾವು ಅವರಿಂದ ಕಲಿತುಕೊಂಡಿದ್ದೇವೆ. ಸಣ್ಣ ವಿಚಾರಗಳಿಂದ ದೊಡ್ಡ ಪ್ರಚಾರ ಪಡೆಯುವ ಕಲೆ ಅವರಲ್ಲಿ ಅದನ್ನು ನಾವು ಕಲಿತುಕೊಂಡಿದ್ದೇವೆ ಎಂದರು.

ಖಾದರ್ ಅವರು ಸೌಹಾರ್ದತೆಯನ್ನು ಬಿತ್ತುವ ನಾಯಕ. ಎಲ್ಲಾ ಪಕ್ಷದವರನ್ನು ಸಮಾನವಾಗಿ ಮುನ್ನಡೆಸುವ ಸಾಮಾರ್ಥ್ಯ ಅವರಲ್ಲಿದೆ. ಖಾದರ್ ಅವರ ಸ್ವಾಭಾವವೇ ಅವರನ್ನು ಈ ಹಂತಕ್ಕೆ ತಂದಿದೆ. ಕರಾವಳಿಯಿಂದ ಸ್ಪೀಕರ್ ಆಗಿ ಆಯ್ಕೆಯಾಗಿರುವುದು ನಮ್ಮ ಹಿರಿಮೆಯಾಗಿದೆ ಎಂದರು. ಈ ಹಿಂದೆ ವೈಕುಂಟ ಬಾಳಿಗಾ ಅವರು ಸ್ಪೀಕರ್ ಆಗಿದ್ದರು. ಅದನ್ನು ಈ ಸಂದರ್ಭದಲ್ಲಿ ಸುನಿಲ್ ಕುಮಾರ್ ಅವರು ನೆನಪಿಸಿಕೊಂಡಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!