ಬೆಳ್ತಂಗಡಿ: ಜುಗಾರಿ ಆಡುತ್ತಿದ್ದ ಸ್ಥಳಕ್ಕೆ ಪೋಲಿಸರು ದಾಳಿ ನಡೆಸಿ 9 ಜನ ಆರೋಪಿಗಳನ್ನು ಬಂಧಿಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಶಿಶಿಲ ಗ್ರಾಮದವರಾದ ವೆಂಕಪ್ಪ ಪೂಜಾರಿ(55), ವಸಂತ ಗೌಡ(48), ಕೃಷ್ಣಪ್ಪ ಗೌಡ(45), ಶಿವರಾಮ ಗೌಡ(53), ಸದಾಶಿವ(38), ಮುಳಿಮಜಲು ಪೊಡಿಯಾ(50), ಹೊನ್ನಪ್ಪ (47), ಸುರೇಶ್(33), ಕೇಶವ(42) ಬಂಧಿತ ಆರೋಪಿಗಳು. ಶಿಶಿಲ ಗ್ರಾಮದ ಕಂಚಿನಡ್ಕ ಸರಕಾರಿ ಗುಡ್ಡ ಪ್ರದೇಶದಲ್ಲಿ ಎಲೆಗಳನ್ನು ಉಪಯೋಗಿಸಿ ಅಂದರ್‌ಬಾಹರ್ ಎಂದು ಹೇಳುತ್ತಾ ಇಸ್ಪೀಟ್ ಎಲೆಗಳನ್ನು ಹಾಕುತ್ತಾ ಹಣವನ್ನು ಪಣವಾಗಿ ಇಟ್ಟುಕೊಂಡು ಇಸ್ಪೀಟ್ ಆಟವಾಡುತ್ತಿದ್ದರು.

ಮಾಹಿತಿ ತಿಳಿಸಿದ ಪೊಲೀಸರು ಆರೋಪಿಗಳನ್ನು ಹಿಡಿದುಕೊಂಡು ವಿಚಾರಿಸಿ ಟಾರ್ಪಲ್ ನಲ್ಲಿ ಹಾಕಿದ್ದ 52 ವಿವಿಧ ಜಾತಿಯ ಇಸ್ಪೀಟ್ ಎಲೆಗಳನ್ನು ಹಾಗೂ ಹಣವನ್ನು ಪಣವಾಗಿಟ್ಟ ನಗದು 11,370 ರೂಪಾಯಿ ಹಾಗೂ ಒಂದು ಕಾರು, ಒಂದು ಬೈಕ್‌ ವಶಪಡಿಸಿ ಅಂದಾಜು 1 ಲಕ್ಷ ರೂಪಾಯಿ ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!