ಹುಬ್ಬಳ್ಳಿ: ನಮಗೆ ಪಿಎಫ್‌ಐ ಬ್ಯಾನ್ ಮಾಡುವಂತೆ ಹಾಕಿದ ಸವಾಲಿಗೆ ತಕ್ಕಂತೆ ಇಂದು ಮಾಡಿ ತೋರಿಸಿದ್ದೇವೆ. ಅಷ್ಟೊಂದು ಧಮ್ ಇದ್ರೆ ಸಿದ್ಧರಾಮಯ್ಯನವರು ಹಿಂದೂಗಳ ಓಟು ನನಗೆ ಬೇಕಾಗಿಲ್ಲ ಎಂದು ಹೇಳಲಿ ನೋಡೋಣ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.

ಆರೆಸ್ಸೆಸ್‌ ಬ್ಯಾನ್ ವಿಚಾರವಾಗಿ ಕಾಂಗ್ರೆಸ್ ಹೇಳಿಕೆ ಖಂಡಿಸಿ ಕಿಡಿಕಾರಿದ ನಳಿನ್‌ ಕುಮಾರ್‌ ಕಟೀಲ್, ಮಹಾತ್ಮಾ ಗಾಂಧೀಜಿ ಹೇಳಿದ ಮಾತಿನಂತೆ ನಡೆಯಬೇಕಾದರೆ ಮೊದಲು ದೇಶದಲ್ಲಿ ಕಾಂಗ್ರೆಸ್ ಬ್ಯಾನ್ ಮಾಡಬೇಕು. ದೇಶದಲ್ಲಿ ಭಯೋತ್ಪಾದನೆಗೆ ಮೂಲ ಕಾರಣವೇ ಕಾಂಗ್ರೆಸ್.

ಕೇಂದ್ರೀಯ ತನಿಖಾ ಸಂಸ್ಥೆಗಳು ಸರಿಯಾದ ಕ್ರಮದಲ್ಲಿ ಇನ್ವೆಸ್ಟಿಗೇಶನ್ ನಡೆಸಿ ವರದಿ ತಯಾರಿಸಿ ಧಾರ್ಮಿಕ ಸಂಸ್ಥೆಗಳ ಹೆಸರಲ್ಲಿ ಭಯೋತ್ಪಾದನೆ ಮಾಡುತ್ತಿರುವ ಸಂಘಟನೆಗಳನ್ನು ಬ್ಯಾನ್ ಮಾಡಿದ್ದಾರೆ. ಈ ವಿಚಾರದಲ್ಲಿ ಕಾಂಗ್ರೆಸ್‌ನವರ ನಿಲುವೇನು, ಕಾಂಗ್ರೆಸ್‌ನವರು ಭಯೋತ್ಪಾದಕರಿಗೆ ಬೆಂಬಲವಾಗಿ ನಿಂತಿದ್ದಿರಾ? ಎಂದು ಪ್ರಶ್ನೆ ಮಾಡಿದರು‌.

ಕಾಂಗ್ರೆಸ್‌ನವರು ಪಾದಯಾತ್ರೆ ಮಾಡುವ ರಸ್ತೆಗಳಿಗೆ ನಮಸ್ಕಾರ ಮಾಡಿ ಪಾದಯಾತ್ರೆ ಮಾಡಿ, ಅವೆಲ್ಲವೂ ಅಟಲ್ ಬಿಹಾರಿ ವಾಜಪೇಯಿ ಅವರು ಮಾಡಿದ್ದು. ಇಷ್ಟೊಂದು ಹೇಳಿಕೊಳ್ಲು ಅದು ಯಾವುದೂ ನಿಮ್ಮ ತಾತಾನ, ಅಜ್ಜಿಯ, ತಂದೆಯ, ಹಾಗೂ ತಾಯಿಯ ಅಥವಾ ಮನಮೋಹನ್ ಸಿಂಗ್ ಆಡಳಿತದ ಕಾಲಘಟ್ಟದಲ್ಲಿ ಆಗಲಿಲ್ಲ ಎಂದರು.

By admin

Leave a Reply

Your email address will not be published. Required fields are marked *

error: Content is protected !!