ಕಾಸರಗೋಡು, ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಂದ ಗುಡುಗು ಮಿಂಚು, ಗಾಳಿಯಿಂದ ಕೂಡಿದ ಭಾರೀ ಮಳೆ ಸುರಿದಿದ್ದು, ಹಲವೆಡೆ ಅಪಾರ ಹಾನಿ, ನಷ್ಟ ಉಂಟಾಗಿದೆ.

ಮುಳಿಯಾರು ಪತ್ತನಡ್ಕ ಕಡಪ್ಪಂಗಾಲ್ ನಲ್ಲಿ ಮನೆಯೊಂದರ ಮೇಲೆ ಗುಡ್ಡ ಕುಸಿದು ಮನೆ ಭಾಗಶಃ ಕುಸಿದಿದೆ. ಸಾವಿತ್ರಿ ಎಂಬವರ ಮನೆ ಮೇಲೆ ಗುಡ್ಡ ಕುಸಿದು ಹಾನಿ ಉಂಟಾಗಿದ್ದು, ಮನೆಯವರು ಅಪಾಯ ದಿಂದ ಪಾರಾಗಿದ್ದಾರೆ.

ಇನ್ನು ಕಾನತ್ತೂರಿನ ಮುರಳಿ, ಮೋಹನ್ ಎಂಬವರ ಮನೆ ಮೇಲೂ ಮಣ್ಣು ಕುಸಿದು ಬಿದ್ದಿದ್ದು, ಮನೆ ಗಳಿಗೆ ಹಾನಿ ಗೊಂಡಿದೆ.

ತೋಟದಮೂಲೆ ರಸ್ತೆ ಮಳೆಗೆ ಕೊಚ್ಚಿ ಹೋಗಿದ್ದು, ಹಲವೆಡೆ ಕೃಷಿ ಹಾನಿ ಉಂಟಾದ ಬಗ್ಗೆಯೂ ವರದಿಯಾಗಿದೆ.

By admin

Leave a Reply

Your email address will not be published. Required fields are marked *

error: Content is protected !!