ಬಂಟ್ವಾಳ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ  ಕಲ್ಲಡ್ಕದಲ್ಲಿ ಬೆಳಿಗ್ಗೆ ಯಿಂದ ಸಂಚಾರಕ್ಕೆ ತಡೆ ಉಂಟಾಗಿದೆ. ಬೆಳಿಗ್ಗೆ ಸುಮಾರು ‌8 ಗಂಟೆಯ ವೇಳೆ ಆರಂಭವಾದ ಸಂಚಾರಕ್ಕೆ ಅಡಚಣೆ 10.30  ಗಂಟೆ ವರೆಗೂ ಮುಗಿದಿಲ್ಲ.
ಕಲ್ಲಡ್ಕ ಅಮ್ಟೂರು ಕ್ರಾಸ್ ನ ಬಳಿ ಹೆದ್ದಾರಿಯಲ್ಲಿ ಬೃಹತ್ ಹೊಂಡ ವೊಂದು ನಿರ್ಮಾಣ ವಾದ ಹಿನ್ನೆಲೆಯಲ್ಲಿ ಪ್ರಾರಂಭವಾದ ಬ್ಲಾಕ್ ನಿರಂತರವಾಗಿ ಮುಂದುವರಿದಿದೆ. ಬೆಳಿಗ್ಗೆ ಹೊತ್ತು ಕೆಲಸಕ್ಕೆ ಹೋಗುವವರ ಜೊತೆ ಅಂಬ್ಯುಲೆನ್ಸ್ ವಾಹನಗಳು ಕೂಡ ತಾಸು ಗಟ್ಟಲೆ ಕ್ಯೂ ನಲ್ಲಿ ನಿಂತು ಪರದಾಡಬೇಕಾಯಿತು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡ   ಕೆ.ಎನ್.ಆರ್.ಸಿ.ಕಂಪೆನಿ ಗುಂಡಿ ಮುಚ್ಚುವ ಕಾರ್ಯ ಮಾಡಿದೆ. ಆದರೆ ಕಾಮಗಾರಿ ಆರಂಭವಾದ ಬಳಿಕ ನಿರಂತರವಾಗಿ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆಯಾದರೂ ಈ ರೀತಿಯಲ್ಲಿ ತಾಸುಗಟ್ಟಲೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ತಡೆಯಾಗುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ.
5 ನಿಮಿಷಗಳ ಕಾಲ ಹೆದ್ದಾರಿ ಬಂದ್ ಆದರೆ ಕಾನೂನು ಕ್ರಮ ಕೈಗೊಳ್ಳುವ ಪೋಲೀಸರು ಗುತ್ತಿಗೆ ವಹಿಸಿಕೊಂಡ ಕಂಪೆನಿಯ ಅವ್ಯವಸ್ಥಿತ ಕಾಮಗಾರಿ ಯಿಂದ ಈ ತೊಂದರೆ ಆದರೂ ಅವರ ಬಗ್ಗೆ ಯಾಕೆ ಮೃದು ಧೋರಣೆ ಹೊಂದಿದೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!