ವಿಟ್ಲ : ಟ್ಯಾಂಕರ್ ಹಾಗೂ ತೂಪಾನ್ ವ್ಯಾನ್ ನಡುವೆ ಸೂರಿಕುಮೇರು ಎಂಬಲ್ಲಿ ಭೀಕರ ಅಪಘಾತ ಸಂಭವಿಸಿದೆ. ತೂಪಾನ್ ಚಾಲಕ ಗಂಭೀರ ಗಾಯಗೊಂಡಿದ್ದು, ಘಟನೆಯಲ್ಲಿ ತೂಪಾನ್ ಸಂಪೂರ್ಣ ನಜ್ಜುಗುಜ್ಜಾಗಿದೆ.

ತೂಪಾನ್ ಚಾಲಕನ  ಸೇರಾ ನಿವಾಸಿ ಸುರೇಂದ್ರ ಎಂದು ಗುರುತಿಸಲಾಗಿದೆ. .ಗಂಭೀರ ಗಾಯಗೊಂಡ ಈತನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ

ಸೇರದಲ್ಲಿರುವ ಗೇರು ಬೀಜದ ಪ್ಯಾಕ್ಟರಿಗೆ ಬರುವ ಕೆಲಸಗಾರರನ್ನು ಮನೆಗೆ ಬಿಟ್ಟು ಬರುವ ವೇಳೆ ಅಪಘಾತ ಸಂಭವಿಸಿದೆ. ರಸ್ತೆ ಕಾಮಗಾರಿ ‌ನಡೆಯುತ್ತಿದ್ದು ರಸ್ತೆಯೇ ಕಾಣುತ್ತಿಲ್ಲ.

ಒಂದು ಕಡೆ ಧಾರಾಕಾರವಾಗಿ ಸುರಿಯುವ ಮಳೆ ಇನ್ನೊಂದು ಕಡೆ ರಸ್ತೆ ಕಾಮಗಾರಿ ಯ ಅವಾಂತರ. ಇತ್ತೀಚಿನ ದಿನಗಳಲ್ಲಿ ನಡೆಯುವ ಅಪಘಾತ ಗಳಿಗೆ ರಸ್ತೆಯ ಅವಾಂತರ ವೇ ಕಾರಣ ವೆನ್ನಲಾಗಿದೆ. ವಿಟ್ಲ ಠಾಣಾ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ

Leave a Reply

Your email address will not be published. Required fields are marked *

error: Content is protected !!