ಮಂಗಳೂರಿನ ಎಸ್ ಡಿಪಿಐ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಎಸ್ ಡಿಪಿಐ ಕಾರ್ಯಕರ್ತರು ಪೊಲೀಸರಿಗೆ ನಾಯಿ ಎಂದು ನಿಂದನೆ ಹಾಗೂ ಪೊಲೀಸ್ ಮೇಲೆ ಕಾರು ಹತ್ತಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೆ ಇದೀಗ ಐದು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಬೈಕ್ ನಲ್ಲಿ ಎಸ್ ಡಿಪಿಐ ಧ್ವಜ ಹಿಡಿದು ಪೊಲೀಸರು ನಾಯಿಗಳು ಎಂದಿದ್ದ ಕಾರ್ಯಕರ್ತರು ಅ ಬಳಿಕ ಪೊಲಿಸ್ ಸಿಬ್ಬಂದಿಗೆ ಕಾರ್ಯ ಹತ್ತಿಸಲು ಯತ್ನಿಸಿದ್ದರು ಎಂದು ಪ್ರಕರಣ ದಾಖಲಾಗಿತ್ತು. ಇದಿಗ ಕಾರು ಹತ್ತಿಸಲು ಯತ್ನಿಸಿದ ಪ್ರಕರಣ ಸಂಬಂಧ ಐದು ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅಪಾಯಕಾರಿಯಾಗಿ ವಾಹನ ಚಾಲನೆ, ಗಸ್ತಿನಲ್ಲಿದ್ದ ಪೊಲೀಸರ ಮೇಲೆ ವಾಹನ ಹತ್ತಿಸಲು ಯತ್ನ ಹಾಗೂ ಪೊಲೀಸರ ನಿಂದನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಐದು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸಫ್ವಾನ್ (26), ಅಬ್ದುಲ್ ಸಲಾಂ (23), ಮುಹಮ್ಮದ್ ಹುನೇಝ್ (23) ಮುಹಮ್ಮದ್ ಶಾಹಿಲ್ (23), ಮುಹಮ್ಮದ್ ಫಲಾಹ್ (20) ಎಂದು ಗುರುತಿಸಲಾಗಿದೆ. ಆರೊಪಿಗಳಿಂದ ಕಾರು ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಣ್ಣೂರಿನಲ್ಲಿ ನಡೆದ ಎಸ್ಡಿಪಿಐ ಸಮಾವೇಶಕ್ಕೆ ಹೋಗುತ್ತಿದ್ದರು ಎಂದು ಪ್ರಕರಣದಲ್ಲಿ ದಾಖಲಾಗಿದೆ. ನಿನ್ನೆಯ ದಿನ ಈ ಪ್ರಕರಣ ಸಂಬಂಧ ಆರೋಪಿಗಳು ಹಾಗೂ ಅವರಿಗೆ ಅಶ್ರಯ ನೀಡಿದ ಪ್ರಕರಣದಲ್ಲಿ ೯ ಮಂದಿಯನ್ನು ಬಂಧಿಸಲಾಗಿತ್ತು.