ಬೆಂಗಳೂರು: ವಾಟರ್ ಟ್ಯಾಂಕರ್ ಹರಿದು 4 ವರ್ಷದ ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲಕ ಸೇರಿ ಮೂವರನ್ನು ಪೊಲೀಸರು ಬಂಧಿಸಲಾಗಿದೆ. ಚಾಲಕನಾದ ಎಂ.ಡಿ.ರಖೀಬ್, ಟ್ಯಾಂಕರ್ ಮಾಲೀಕ ಆನಂದ್ ಹಾಗೂ ಮತ್ತೊಬ್ಬ ವ್ಯಕ್ತಿ ರಮೇಶ್ ಬಾಬು ಎಂಬುವವನ್ನು ಪೊಲೀಸರು ಬಂಧಿಸಿದ್ದಾರೆ.
ಅಪಘಾತ ಘಟನೆ ಬಳಿಕ ಎಚ್ಎಸ್ಆರ್ ಟ್ರಾಫಿಕ್ ಪೊಲೀಸರು ಟ್ಯಾಂಕರ್ ಮಾಲೀಕ ಆರ್.ಆನಂದ್ಗೆ ನೋಟಿಸ್ ನೀಡಿದ್ದು, ಚಾಲಕನನ್ನು ಪೊಲೀಸರ ಬಳಿಕೆ ಕರೆತರುವಂತೆ ಸೂಚಿಸಿದ್ದರು. ನಂತರ ಮಾಲೀಕ ಆನಂದ್, ರಮೇಶ್ ಬಾಬು ಎಂಬಾತನನ್ನು ಪೊಲೀಸರ ಮುಂದೆ ಚಾಲಕನಾಗಿ ಹಾಜರುಪಡಿಸಿದ್ದು, ನಂತರ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ, ತನಿಖೆಯಿಂದ ರಮೇಶ್ ಚಾಲಕನಲ್ಲ, ಆದರೆ ಆನಂದ್ ಹಣದ ಆಸೆ ತೋರಿಸಿ ಸುಳ್ಳು ಹೇಳುವಂತೆ ಒಪ್ಪಿಸಿದ್ದಾನೆಂದು ತಿಳಿದುಬಂದಿದೆ.
ಇದೂ, ಸುಳ್ಳು ಹೇಳಿಕೆ ನೀಡಿ ಪೊಲೀಸರ ಮುಂದೆ ಶರಣಾಗಿದ್ದಕ್ಕೆ ರಮೇಶ್ ಬಾಬುನನ್ನೂ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಬಳಿಕ ತೀವ್ರ ಹುಡುಕಾಟ ಬಳಿಕ ಚಾಲಕ ರಖೀಬ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.