ನವದೆಹಲಿ : ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲಿದ್ದಾನೆ ಎಂದು ಜಾರಿ ನಿರ್ದೇಶನಾಲಯ – ಈಡಿ ಮುಂದೆ  ಆತನ ಸೋದರಳಿಯ ಅಲಿಶಾ ಪಾರ್ಕರ್  ಹೇಳಿದ್ದಾನೆ.  ಮಾತ್ರವಲ್ಲ ಹಬ್ಬ ಹರಿದಿನಗಳಲ್ಲಿ ದಾವೂದ್‌ನ ಪತ್ನಿಯನ್ನು ತನ್ನ ಕುಟುಂಬವು ಸ್ವಾಗತಿಸುತ್ತದೆ ಎಂದು ಅಲಿಶಾ ಪರ್ಕರ್ ಹೇಳಿಕೆ ನೀಡಿದ್ದಾನೆ.


ದಾವೂದ್ ಇಬ್ರಾಹಿಂ 1986 ರ ಸುಮಾರಿಗೆ ಭಾರತವನ್ನು ತೊರೆದಿದ್ದ ಎಂದು ಇಡಿ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. ದಾವೂದ್ ಇಬ್ರಾಹಿಂ ಕರಾಚಿಯಲ್ಲಿದ್ದಾನೆ ಎಂದು ನಾನು ವಿವಿಧ ಮೂಲಗಳು ಮತ್ತು ಸಂಬಂಧಿಕರಿಂದ ಕೇಳಿದ್ದೇನೆ” ಎಂದು ಸೋದರಳಿಯ ಅಲಿಶಾ ಹೇಳಿದ್ದಾನೆ. ಅವರು ಕರಾಚಿಗೆ ಹೋದಾಗ ನಾನಿನ್ನು ಹುಟ್ಟಿರಲಿಲ್ಲ ಮತ್ತು ನಾನು ಹಾಗೂ ನನ್ನ ಕುಟುಂಬದ ಸದಸ್ಯರು ದಾವುದ್  ಜೊತೆಗೆ ಸಂಪರ್ಕದಲ್ಲಿಲ್ಲ ಎಂದಿದ್ದಾನೆ. ಕೆಲವು ಸಂದರ್ಭದಲ್ಲಿ, ಈದ್, ದೀಪಾವಳಿ ಮತ್ತು ಇತರ ಹಬ್ಬದ ದಿನಗಳಲ್ಲಿ, ಶ್ರೀಮತಿ ಮೆಹಜಬೀನ್ ದಾವೂದ್ ಇಬ್ರಾಹಿಂ ಅವರು ನನ್ನ ಚಿಕ್ಕಮ್ಮ ಮತ್ತು ನನ್ನ ತಾಯಿಯ ಚಿಕ್ಕಪ್ಪ,  ನನ್ನ ಹೆಂಡತಿ ಆಯೇಷಾ ಮತ್ತು ನನ್ನ ಸಹೋದರಿಯರೊಂದಿಗೆ ಸಂಪರ್ಕದಲ್ಲಿರುತ್ತಾರೆ ಎಂದು ಹೇಳಿದ್ದಾನೆ.
ಕಳೆದ ಮೇ.12ರಂದು ಪಾಕಿಸ್ತಾನದಲ್ಲಿ ಅಡಗಿ ಕುಳಿತಿದ್ದ ಮೋಸ್ಟ್ ವಾಂಟೆಡ್ ದಾವೂದ್ ಇಬ್ರಾಹಿಂನ ಇಬ್ಬರು ಸಹಚರರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿತ್ತು. ಬಂಧಿತ ಆರೋಪಿಗಳನ್ನು ಆರೀಫ್ ಅಬೂಬಕರ್ ಶೇಖ್ (59 ವರ್ಷ) ಮತ್ತು ಶಬ್ಬೀರ್ ಅಬೂಬಕರ್ ಶೇಖ್ (51 ವರ್ಷ) ಎಂದು ಗುರುತಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!