ಬಳ್ಳಾರಿ: ಎಟಿಎಂಗೆ ಹಣ ಹಾಕುವ ಉದ್ಯೋಗದಲ್ಲಿದ್ದ ವ್ಯಕ್ತಿಯೇ ತನಗೆ ನೀಡಿದ ಕ್ಯಾಶ್ ಜೊತೆ ಎಸ್ಕೇಪ್ ಆಗಿದ್ದ ಆರೋಪಿಯನ್ನು ಬಳ್ಳಾರಿಯ ಬ್ರೂಸ್ ಪೇಟ್ ಪೊಲೀಸರು ಬಂಧಿಸಿದ್ದಾರೆ.

ಸಿಎಸ್‍ಎಂ ಕಂಪನಿಯಲ್ಲಿ ಕಸ್ಟೋಡಿಯನ್ ಆಗಿ ಕೆಲಸ ಮಾಡುತ್ತಿದ್ದ ನೀಲಕಂಠ ಬಂಧಿತ ಆರೋಪಿ. ನೀಲಕಂಠನಿಗೆ ಕರ್ಣಾಟಕ ಬ್ಯಾಂಕ್‍ನವರು ಎಟಿಎಂಗಳಿಗೆ ಹಣ ಹಾಕಲು ಸುಮಾರು 50.18 ಲಕ್ಷ ಹಣ ನೀಡಿದ್ದರು. ನೀಲಕಂಠ ಎಟಿಎಂಗೆ ಹಾಕಲು ಕೊಟ್ಟಿದ್ದ ಹಣದ ಜೊತೆಯಲ್ಲಿ ಎಟಿಎಂನಲ್ಲಿ ಇದ್ದ 6 ಲಕ್ಷ ರೂ. ಅಂದರೆ ಒಟ್ಟು 56.18 ಲಕ್ಷ ಕದ್ದು ಎಸ್ಕೇಪ್ ಆಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯು ಶನಿವಾರ ನಡೆದಿದ್ದು, ಪ್ರಕರಣ ನಡೆದ 24 ಗಂಟೆಯಲ್ಲಿ ಖಚಿತ ಮಾಹಿತಿ ಮೇರೆಗೆ, ಆರೋಪಿಯನ್ನು ಕೊಪ್ಪಳದಲ್ಲಿ ಪೊಲೀಸರು ಬಂಧಿಸಿದ್ದಾರೆ. ಕದ್ದ ಹಣದಲ್ಲಿ ನೀಲಕಂಠ ಒಂದು ಮೊಬೈಲ್ ತೆಗೆದುಕೊಂಡಿದ್ದು, ಮೊಬೈಲ್ ಸೇರಿದಂತೆ ಕೃತ್ಯಕ್ಕೆ ಬಳಸಿದ್ದ ಬೈಕ್ ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!