ಆಯೋಧ್ಯೆಯ ಭವ್ಯ ಶ್ರೀ ರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆ ಮಂಜೇಶ್ವರದ ಬಾಕ್ರಬೈಲಿನ ಪಾತೂರು ಶ್ರೀ ಸೂರ್ಯೇಶ್ವರ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ, ಭಜನಾ ಸಂಕೀರ್ತನೆ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಿತು. ಆಯೋಧ್ಯೆಯಲ್ಲಿ ನಡೆದ ಕಾರ್ಯಕ್ರಮದ ನೇರಪ್ರಸಾರ ಏರ್ಪಡಿಸಲಾಗಿತ್ತು, ಈ ಸಂದರ್ಭ ಭಕ್ತರು ನೇರಪ್ರಸಾರ ವೀಕ್ಷಿಸುವ ಮೂಲಕ ಜಯಘೋಷ ಹೇಳಿ ಸಂಭ್ರಮಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆಯೋಧ್ಯೆಯಲ್ಲಿ ಕರ ಸೇವೆ ಮಾಡಿದ ಸೀತಾರಾಮ ನಾಯ್ಕ್, ಲಿಂಗಪ್ಪ ನಾಯ್ಕ್, ರವಿನಾರಾಯಣ ಭಟ್, ಪರಮೇಶ್ವರ ಕಾರಂತ, ನಾರಾಯಣ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ರವಿನಾರಾಯಣ ಭಟ್ ಆಯೋಧ್ಯೆಗೆ ತೆರಳಿದ ಸಂಕಷ್ಟದ ದಿನಗಳ ಅನುಭವ‌ ತಿಳಿಸಿದರು. ಕಾರ್ಯಕ್ರಮದಲ್ಲಿ ಹನುಮಾನ್ ಚಾಲೀಸಾ ಕಂಠಪಾಠ ಸ್ಪರ್ಧೆಯಲ್ಲೊ ವಿಜೇತರಾದ ಸ್ಪೂರ್ತಿ ಪಿ. ಶೆಟ್ಟಿ ಕರ್ಪಿಕಾರ್ ಹಾಗೂ ಸಾನಿಧ್ಯ ಭಟ್ ಅವರಿಗೆ ಪ್ರಶಸ್ತಿ ನೀಡಲಾಯಿತು.
ಈ ಸಂದರ್ಭ ಪಾತೂರು ಶ್ರೀ ಸೂರ್ಯೇಶ್ವರ ದೇವಸ್ಥಾನದ ಡೆವಲಂಪ್ ಮೆಂಟ್ ಟ್ರಸ್ಟ್ ಅಧ್ಯಕ್ಷರಾದ ರವೀಂದ್ರನಾಥ ಆಳ್ವ ಮಲಾರುಬೀಡು, ಆಡಳಿತ ಮೊಕ್ತೇಸರರಾದ ಮಂಜುನಾಥ ಶೆಟ್ಟಿ ಬಾಕ್ರಬೈಲು ಧರ್ಮಚಾವಡಿ ಮನೆ, ಕ್ಢೇತ್ರದ ಪ್ರಧಾನ ಅರ್ಚಕ ಶ್ರೀರಾಮ್ ಭಟ್, ಪವಿತ್ರಪಾಣಿ ಕುಶಲಕುಮಾರ ಪಾತೂರಾಯ, ವಸಂತ ಭಂಡಾರಿ ಕಯ್ಯ, ಟ್ರಸ್ಟ್ ಕಾರ್ಯದರ್ಶಿ ವಿದ್ಯಾನಂದ ಸಾಮಾನಿ ಉಪಸ್ಥಿತರಿದ್ದರು.

By admin

Leave a Reply

Your email address will not be published. Required fields are marked *

error: Content is protected !!