ಮಂಜೇಶ್ವರದ ಬಾಕ್ರಬೈಲಿನ ಪಾತೂರು ಶ್ರೀ ಸೂರ್ಯೇಶ್ವರ ದೇವಸ್ಥಾನದಲ್ಲಿ ಆಯೋಧ್ಯೆಯಿಂದ ಆಗಮಿಸಿದ ಪವಿತ್ರ ಮಂತ್ರಾಕ್ಷತೆ ಯನ್ನು ಮನೆ ಮನೆಗೆ ತಲುಪಿಸುವ ವಿತರಣಾ ಕಾರ್ಯ ನಡೆಯಿತು. ಈ ಸಂದರ್ಭ ದೇಗುಲದ ವ್ಯಾಪ್ತಿಯ 350 ಕ್ಕೂ ಮನೆಗಳಿಗೆ ತೆರಳಿ ಮಂತ್ರಾಕ್ಷತೆ ವಿತರಣೆ ನಡೆಯಿತು.
ದೇಗುಲದ ಪ್ರಧಾನ ಅರ್ಚಕ ಶ್ರೀರಾಮ್ ಭಟ್ ಮಂತ್ರಾಕ್ಷತೆ ಮಹತ್ವ ತಿಳಿಸಿದರು. ಈ ಸಂದರ್ಭ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ವಿದ್ಯಾನಂದ ಸಾಮಾನಿ ಬಾಳೆಪುಣಿಗುತ್ತು, ಮಂಜುನಾಥ ರೈ ಕರ್ಪಿಕಾರ್, ಗುಂಡು ಗಾಣಿಗ, ಹರೀಶ್ ಶೆಟ್ಟಿ ಕರ್ಪಿಕಾರ್, ಪುರಂದರ ಶೆಟ್ಟಿ ಕರ್ಪಿಕಾರ್, ವಿಶ್ವನಾಥ ಶೆಟ್ಟಿ ಕೊಡಂಗೆ ಹಾಗೂ ಹೆಚ್ಚಿನ ಸಂಖ್ಯೆಯ ರಾಮ ಭಕ್ತರು ಉಪಸ್ಥಿತರಿದ್ದರು.

By admin

Leave a Reply

Your email address will not be published. Required fields are marked *

error: Content is protected !!