ಕಾಸರಗೋಡು: ಚುನಾವಣೆಯ ಅಹವಾಲು ಸ್ವೀಕಾರ ಸಭೆಯಲ್ಲಿ ಸಹಾಯಕ ತಹಶೀಲ್ದಾರ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಅವರ ಸಹಿತ 4 ಮಂದಿಗೆ ಒಂದು ವರ್ಷ, 3 ತಿಂಗಳ ಸಜೆಯನ್ನು ಕಾಸರಗೋಡು ಪ್ರಥಮ ದರ್ಜೆ ನ್ಯಾಯಾಲಯ ವಿಧಿಸಿದೆ.

ಘಟನೆ ನಡೆದಾಗ ಎ.ಕೆ.ಎಂ.ಅಶ್ರಫ್ (46) ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಮಂಜೇಶ್ವರ ಪಂಚಾಯತಿ ಸದಸ್ಯರಾಗಿದ್ದ ಅಬ್ದುಲ್ಲ ಕಜೆ(58), ಬಡಾಜೆ ನಿವಾಸಿ ಬಶೀರ್ ಕನಿಲ((52), ಬಂಗ್ರ ಮಂಜೇಶ್ವರದ ಅಬ್ದುಲ್ ಖಾದರ್ (62) ಇತರ ಆರೋಪಿಗಳು.
5 ll 61%
2015 ನ.25ರಂದು ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸಭಾಂಗಣದಲ್ಲಿ ಘಟನೆ ನಡೆದಿತ್ತು.
‘ಜಿಲ್ಲಾ ಪ್ರಥಮ ದರ್ಜೆ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲಿನ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವೆ’ ಎಂದು ಶಾಸಕ ಎ.ಕೆ.ಎಂ.ಅಶ್ರಫ್ ಪ್ರತಿಕ್ರಿಯಿಸಿದರು.

By admin

Leave a Reply

Your email address will not be published. Required fields are marked *

error: Content is protected !!