ಹಠಾತ್ ಅನಾರೋಗ್ಯಕ್ಕೆ ತುತ್ತಾಗಿ ೮ನೇ ತರಗತಿ ವಿದ್ಯಾರ್ಥಿಯೋರ್ವ ಮೃತಪಟ್ಟಿರುವ ಘಟನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವರದಿಯಾಗಿದೆ.
ಮಂಗಳೂರಿನ ಮಿಲಾಗ್ರಿಸ್ ಚರ್ಚ್ ವ್ಯಾಪ್ತಿಯ ಅತ್ತಾವರ ನಿವಾಸಿ ಅಲೋನ್ಸ್ ಹಾಗೂ ಸೋನಿಯಾ ದಂಪತಿಯ ಪುತ್ರ ಆಶೀಶ್ ಡಿಸೋಜ(13) ಮೃತಪಟ್ಟ ಬಾಲಕ. ಈತ ನಗರದ ಖಾಸಗಿ ಶಾಲೆಯಲ್ಲಿ 8ನೇ ತರಗತಿಯ ವಿದ್ಯಾರ್ಥಿಯಾಗಿದ್ದ. ಜ್ವರ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಈತನನ್ನು ಹಾಗೂ ಈತನ ಸಹೋದರನನ್ನು ಆಸ್ಪತ್ರಗೆ ದಾಖಲಿಸಲಾಗಿತ್ತು. ಜ್ವರದಿಂದ ಇಬ್ಬರೂ ಕೂಡ ಗುಣಮುಖರಾಗಿದ್ದರು ಎಂದು ತಿಳಿದುಬಂದಿದೆ.
ಆದರೆ, ಆಶಿಶ್ ಇಂದು ಬೆಳಗ್ಗಿನ ಜಾವ ಪೋಷಕರಿಂದ ನೀರು ಕೇಳಿ ಕುಡಿದಿದ್ದು ಆ ಬಳಿಕ ಪ್ರಾಣ ಬಿಟ್ಟಿದ್ದಾನೆ. ಹೃದಯಾಘಾತವಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಮೃತ ಬಾಲಕನ ಅಂತ್ಯ ಸಂಸ್ಕಾರ ಮಂಗಳೂರಿನ ಮಿಲಾಗ್ರಿಸ್ ಚರ್ಚ್ನಲ್ಲಿ 11 ಗಂಟೆಗೆ ನಡೆಯಲಿದೆ. ಬಳಿಕ ಶರೀರವನ್ನು ಮೆಡಿಕಲ್ ಕಾಲೇಜಿಗೆ ಹಸ್ತಾಂತರ ಮಾಡಲು ಪೋಷಕರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಮೃತರ ಪೋಷಕರು ಕಾಸರಗೋಡಿನ ಮಂಜೇಶ್ವರದ ಕಯ್ಯಾರ್ ಮೂಲದವರು ಎಂದು ತಿಳಿದುಬಂದಿದೆ.