ಹುಲಿ ವೇಷಧಾರಿಯೊಬ್ಬರಿಗೆ ಕುಣಿತದ ವೇಳೆಯೇ ಆವೇಷ ಬಂದು ವೇದಿಕೆಯಲ್ಲೇ ಕೆರಳಿದ ಘಟನೆಯೊಂದು ವರದಿಯಾಗಿದೆ. ಉಡುಪಿಯ ನಿಟ್ಟೂರಿನಲ್ಲಿ ನಡೆದ ಹುಲಿವೇಷ ಸ್ಪರ್ಧೆಯ ಸಂಧರ್ಬದಲ್ಲಿ ನಡೆದ ಘಟನೆ ಇದು.
ಆವೇಷ ಬಂದು ವೇದಿಕೆಯ ಕಾರ್ಪೆಟ್ ನ್ನು ಹುಲಿ ಹರಿದು ಹಾಕಿದೆ.
ಹುಲಿ ಕುಣಿಯುತ್ತಿದ್ದಾಗಲೇ ತಾಸೆಯ ಸದ್ದಿಗೆ ಆವೇಷ ಮೂಡಿದೆ.
ತಕ್ಷಣವೇ ತಾಸೆ ನಿಲ್ಲಿಸಿ ವೇಷಧಾರಿಯನ್ನು ಇತರರು ಹಿಡಿದುಕೊಂಡಿದ್ದಾರೆ.
ಸಮಾಧಾನಿಸಲು ಬಂದ ತಂಡದ ಸದಸ್ಯನನ್ನು ಕೂಡಾ ಹಿಡಿದಿಟ್ಟಿದ್ದಾರೆ.