ಪೊಲೀಸರು ಬೆನ್ನಟ್ಟಿದ ಸಂದರ್ಭದಲ್ಲಿ ಕಾರು ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದ್ದ ವಿದ್ಯಾರ್ಥಿ ಮೃತಪಟ್ಟ ಘಟನೆ ನಡೆದಿದೆ. ಅಂಗಡಿ ಮೊಗರು ಸರಕಾರಿ ಹಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿ, ಕುಂಬಳೆ ಪೇರಾಲ್ ಕಣ್ಣೂರಿನ ಮುಹಮ್ಮದ್ ಫರ್ ಹಾಜ್ (17) ಮೃತಪಟ್ಟ ವಿದ್ಯಾರ್ಥಿ. ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಫರ್ ಹಾಜ್ ಬೆಳಿಗ್ಗೆ ಮೃತಪಟ್ಟಿದ್ದಾನೆ . ಶುಕ್ರವಾರದಂದು ಕಳತ್ತೂರು ಪಳ್ಳ ಎಂಬಲ್ಲಿ ಅಪಘಾತ ನಡೆದಿತ್ತು . ಶಾಲೆಯಲ್ಲಿ ನಡೆದ ಓಣಂ ಕಾರ್ಯಕ್ರಮ ಮುಗಿಸಿ ಫರ್ ಹಾಜ್ ಹಾಗೂ ಮೂವರು ಸಹಪಾಠಿಗಳು ಸಂಚರಿಸುತ್ತಿದ್ದ ಕಾರು ಈ ಅಪಘಾತಕ್ಕೀಡಾಗಿತ್ತು. ಖತೀಬ್ ನಗರದಲ್ಲಿ ಕಾರನ್ನು ಬೆನ್ನಟ್ಟಿ ದಾಗ ಅತೀ ವೇಗದಲ್ಲಿ ಕಾರು ಚಲಾಯಿಸಿದ್ದು, ಕಳತ್ತೂರು ಪಳ್ಳ ಎಂಬಲ್ಲಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಸಮೀಪ ಕಾರು ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಫರ್ ಜಾಜ್ ಹಾಗೂ ಸಹಪಾಠಿಗಳು ಗಾಯಗೊಂಡಿದ್ದರು. ಈ ಪೈಕಿ ಫರ್ ಹಾಜ್ ಗಂಭೀರ ಗಾಯಗೊಂಡಿದ್ದನು. ಫರ್ ಹಾಜ್ ಮುಂಭಾಗದ ಸೀಟಿನಲ್ಲಿ ಕುಳಿತಿದ್ದನು. ಉಳಿದ ಮೂವರು ವಿದ್ಯಾರ್ಥಿಗಳು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!