ಬೆಂಗಳೂರು: ಪ್ರೀತಿಸಿದ ಹುಡುಗ ಮೋಸ ಮಾಡಿ ವಂಚನೆ ಮಾಡಿದ ಕಾರಣಕ್ಕೆ ನೊಂದ ಯುವತಿ ಡೆತ್ ನೋಟ್ ಬರೆದಿಟ್ಟು ಬೆಂಗಳೂರಿನ ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಮ್ ತರಬೇತುದಾರನ್ನು ಪೊಲೀಸರು ಬಂಧಿಸಿದ್ದಾರೆ.

ವಿದ್ಯಾಶ್ರೀ(25) ಆತ್ಮಹತ್ಯೆ ಮಾಡಿಕೊಂಡ ಯುವತಿ.

ಅಕ್ಷಯ್ (27) ಬಂಧಿತ ಆರೋಪಿ.

ವಿದ್ಯಾಶ್ರಿಯು ನಗರದ ಕಂಪನಿಯೊಂದದರಲ್ಲಿ ಕೆಲಸ ಮಾಡುತ್ತಿದ್ದರು.

ಅಲ್ಲದೆ ‘ಮಿಸ್ ಆಂಧ್ರ’ ಕಿರೀಟವನ್ನು ಪಡೆದಿದ್ದರು.

ಇವರು ಕೆಂಪಾಪುರದಲ್ಲಿ ತಾಯಿ ಜೊತೆ ವಾಸವಿದ್ದರು ಎಂದು ಮೂಲಗಳು ತಿಳಿಸಿವೆ.

ಆರೋಪಿ ಅಕ್ಷಯ್ ಮೂಲತಃ ಮಂಡ್ಯದವನಾಗಿದ್ದು, ಪೋಷಕರ ಜೊತೆ ನಗರದಲ್ಲಿ ವಾಸವಾಗಿದ್ದನು.

2021ರಲ್ಲಿ ಫೇಸ್ ಬುಕ್ ನಲ್ಲಿ ಅಕ್ಷಯ್ ವಿದ್ಯಾಶ್ರೀ ಗೆ ರಿಕ್ವೆಸ್ಟ್ ಕಳುಹಿಸಿ ‘ನಾನು ನಿಮ್ಮ ಅಭಿಮಾನಿ ಎಂದು ಹೇಳಿದ್ದನು.

ಆ ಮೇಲೆ ಇವರ ಮಧ್ಯೆ ಸ್ನೇಹ ಶುರುವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಳಿಕ ಇವರಿಬ್ಬರು ಪರಸ್ಪರ ಪ್ರೀತಿಸಲು ಆರಂಭಿಸಿದ್ದರು.

ಅನೇಕ ಬಾರಿ ಭೇಟಿ ಆಗಿದ್ದು, ಮದುವೆಯಾಗುತ್ತೇನೆ ಎಂದು ನಂಬಿಸಿದ್ದನು ಎನ್ನಲಾಗಿದೆ.

ಅಕ್ಷಯ್ ನು ವಿದ್ಯಾಶ್ರೀ ಜೊತೆ 1.76 ಲಕ್ಷ ಸಾಲ ಪಡೆದಿದ್ದು, ಜೊತೆಗೆ ಲೈಂಗಿಕವಾಗಿ ಬಳಸಿಕೊಂಡಿದ್ದನು ಎಂದು ಹೇಳಲಾಗಿದೆ.

By admin

Leave a Reply

Your email address will not be published. Required fields are marked *

error: Content is protected !!