ಪುತ್ತೂರಿನಲ್ಲಿ ಹಿಂದೂ ಸಂಘಟನೆಯಲ್ಲಿ ಮೆಘಾ ಸ್ಪೋಟಗೊಂಡಿದೆ. ಹಿಂದೂ ಸಂಘಟನೆ ಮುಖಂಡನ ಮೇಲೆ ವಾಮಾಚಾರದ ಆರೋಪ ಕೇಳಿ ಬಂದಿದೆ.
ಭಜರಂಗದಳ ಕರ್ನಾಟಕ ಪ್ರಾಂತ್ಯ ಸಹಸಂಚಾಲಕ ಮುರಳೀಕೃಷ್ಣ ಹಸಂತಡ್ಕ ವಿರುದ್ಧ ಆರೋಪ ಮಾಡಲಾಗಿದೆ. ಕಳೆದ ಚುನಾವಣೆಯಲ್ಲಿ ವಾಮಾಚಾರ ಮಾಡಿ ಅರುಣ್ ಪುತ್ತಿಲರನ್ನು ಸೋಲಿಸಲಾಗಿದೆ ಎನ್ನುವ ಆರೋಪ ಮಾಡಲಾಗಿದೆ.
ಈ ಆರೋಪಕ್ಕೆ ಭಜರಂಗದಳ ಮುಖಂಡ ಪ್ರತ್ಯುತ್ತರ ನೀಡಲಾಗಿದೆ. ತನ್ನ ಮೇಲಿನ ಆರೋಪಕ್ಕೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ತನ್ನ ತೇಜೋವಧೆ ಮಾಡಿದವರನ್ನು ಭಜರಂಗದಳ ಮುಖಂಡ ಫೋನ್ ಮೂಲಕ ಸಂಪರ್ಕಿಸಿದ್ದಾರೆ. ದೇವಸ್ಥಾನಕ್ಕೆ ಬಂದು ಆರೋಪವನ್ನು ದೇವರ ಮುಂದೆ ಹೇಳುವಂತೆ ಕೇಳಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಾಮಾಚಾರ ಆರೋಪ ಹರಿದಾಡುತ್ತಿದೆ.ವಾಮಾಚಾರದ ಆರೋಪದಲ್ಲಿ ಮತ್ತೆ ಹಿಂದೂ ಸಂಘಟನೆಯಲ್ಲಿ ಒಡಕುಕಂಡುಬಂದಿದೆ.
ಪುತ್ತೂರು ಹಿಂದೂ ಸಂಘಟನೆಗಳು ಮತ್ತೆ ಒಡೆದ ಮನೆಯಾಗುತ್ತಿವೆ.