ಕಾಸರಗೋಡು: ರಬ್ಬರ್ ಎಸ್ಟೇಟ್ ನ ಶೆಡ್ ನೊಳಗೆ ಮಹಿಳೆ ಯೋರ್ವ ಳು ಕೊಲೆ ಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಪೆರ್ಲ ಸಮೀಪದ ಏಳ್ಕಾನ ಶೇಣಿ ಮಂಞಾರೆ ಎಂಬಲ್ಲಿ ನಡೆದಿದೆ.

ಕೊಲ್ಲಂ ಮೂಲದ ನೀತು ಕೃಷ್ಣ ಮೃತ ಪಟ್ಟ ವರು.
ಈಕೆಯ ಪತಿ ವಯನಾಡ್ ಮೂಲದ ಆಂಟೋ ಸೆಬಾಸ್ಟಿಯನ್ ಎಂಬಾತ ನಾಪತ್ತೆಯಾಗಿ ದ್ದು, ಸಂಶಯಕ್ಕೆ ಕಾರಣವಾಗಿದೆ.
ಶೇಣಿ ಮಂಞಾರೆಯ ಸುಮಾರು ಮೂರು ಎಕ್ರೆ ಸ್ಥಳ ಕೊಟ್ಟಾಯಂ ನಿವಾಸಿ ರಿಜೋ ಜೋಸೆಫ್ ಎಂಬವರ ಮಾಲಕತ್ವದಲ್ಲಿದ್ದು ಇಲ್ಲಿಗೆ ಒಂದೂವ ರೆ ತಿಂಗಳ
ಹಿಂದೆ ಈ ದಂಪತಿಗಳು ಇಲ್ಲಿಗೆ ರಬ್ಬರ್ ಟ್ಯಾಪಿಂಗ್ ವೃತ್ತಿಗಾಗಿ ಆಗಮಿಸಿದ್ದರು. ಇವರು ವಾಸಿಸುತ್ತಿದ್ದ ಮನೆ ಸಮೀಪದ ಶೆಡ್ ನಲ್ಲಿ ಇತರ ಕಾರ್ಮಿಕರಾದ ವೆಳ್ಳರಿಕುಂಡುವಿನ ರಿಜೋ ಹಾಗೂ ಬಂಗಾಳಿ ಕಾರ್ಮಿಕರಿಬ್ಬರು ವಾಸ ವಾಗಿ ದ್ದರು.
ನೀತು ಕಳೆದ ನಾಲ್ಕು ದಿನ ಗಳಿಂದ ನಾಪತ್ತೆಯಾಗಿದ್ದು, ಪತಿಯಲ್ಲಿ ವಿಚಾರಿಸಿದಾಗ ಊರಿಗೆ ತೆರಳಿ ದ್ದಾ ಗಿ ಹೇಳಿದ್ದನು. ಈ ನಡುವೆ ಆದಿತ್ಯವಾರ ದಿಂದ ಆಂ ಟೋ ಸೆಬಾಸ್ಟಿಯನ್ ನಾಪತ್ತೆಯಾಗಿದ್ದು, ಬುಧವಾರ (ಇಂದು) ಮಧ್ಯಾಹ್ನ ಮನೆಯೊಳ ಗಿ ನಿಂದ ದುರ್ವಾಸನೆ ಬರ ತೊಡಗಿ ದ್ದು ಇದರಿಂದ ಎಸ್ಟೇಟ್ ಮೆನೇಜರ್ ಹಂಚು ಸರಿಸಿ ನೋಡಿದಾಗ ಮೃತದೇಹ ಪತ್ತೆಯಾಗಿದೆ.ಬಳಿಕ ಮಾಹಿತಿ ಯಂತೆ ಸ್ಥಳಕ್ಕೆ ಆಗಮಿಸಿದ ಬದಿಯಡ್ಕ ಪೊಲೀಸರು ಮಹಜರು ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.ಫಾರೆ ನ್ಸಿಕ್ ತಜ್ಞರು ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ

By admin

Leave a Reply

Your email address will not be published. Required fields are marked *

error: Content is protected !!