ರಾಯಚೂರು: ಮೂಗಿನಲ್ಲಿ ಏನೋ ಸಮಸ್ಯೆ
ಇದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ
ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ
ರಾಯಚೂರಿನಲ್ಲಿ ನಡೆದಿದೆ.

ಮೃತ ಯುವತಿಯನ್ನು ರಾಯಚೂರು ನಗರದ
ರಾಜೇಶ್ವರಿ (18) ಎಂದು ಗುರುತಿಸಲಾಗಿದೆ

ಈಕೆಯ ಕುಟುಂಬಸ್ಥರು ರಾಯಚೂರು ನಗರದ
ಕಿಮ್ಸ್ ಆಸ್ಪತ್ರೆ ವೈದ್ಯ ಡಾ.ರಾಜಶೇಖರ್
ಪಾಟೀಲ್ ನಿರ್ಲಕ್ಷ್ಯದಿಂದಲೇ ಬಾಲಕಿ
ಸಾವನ್ನಪಿರುವುದಾಗಿ ಆರೋಪ ಮಾಡುತ್ತಿದ್ದು,
ಆಸ್ಪತ್ರೆಯ ಮುಂದೆಯೇ ಪ್ರತಿಭಟನೆ
ನಡೆಸಿದ್ದಾರೆ.

ಇದೇ ರಾಜೇಶ್ವರಿ ಅಲ್ಲಿಯೇ ರ್ಸಿಂಗ್ ಸೀಟ್
ಪಡೆದಿದ್ದು ಜನವರಿ 10ಕ್ಕೆ ನರ್ಸಿಂಗ್ ಅಡ್ಮಿಷನ್
ಮಾಡಿಸೋಕೆ ಸಿದ್ಧತೆ ಮಾಡಿಕೊಂಡಿದ್ದಳು.

ಈ ಮಧ್ಯೆ ಮೂಗು ನೋವು
ಕಾಣಿಸಿಕೊಂಡಿದ್ದರಿಂದ ಇದೇ ಆಸ್ಪತ್ರೆಗೆ
ದಾಖಲಾಗಿದ್ದಳು. ನಾಲ್ಕು ದಿನ ದಾಖಲು
ಮಾಡಿಕೊಂಡ ವೈದ್ಯರು ಆಪರೇಷನ್
ಮಾಡಿದ್ದರು.

ಆದ್ರೆ ಹುಡುಗಿ ಇದೀಗ ಮೃತಪಟ್ಟಿದ್ದಾಳೆ.
ಆಸ್ಪತ್ರೆಯ ಮುಂದೆ ರಾಜೇಶ್ವರಿ ಕುಟುಂಬಸ್ಥರ
ಆಕ್ರಂದನ ಮುಗಿಲು ಮುಟ್ಟಿದ್ದು, ಆ ದೃಶ್ಯ
ನೋಡುಗರ ಮನ ಕಲಕುವಂತಿತ್ತು.

By admin

Leave a Reply

Your email address will not be published. Required fields are marked *

error: Content is protected !!