ಮಂಗಳೂರು, ನಗರ ಹೊರವಲಯದ ಸುರತ್ಕಲ್ ನಲ್ಲಿರುವ ಅವೈಜ್ಞಾನಿಕ ಟೋಲ್ ಗೇಟ್ ತೆರವುಗೊಳಿಸಲು ಅಗ್ರಹಗಳು ಹೆಚ್ಚಾಗುತ್ತಿದ್ದು ಟೋಲ್ ಗೇಟ್ ಮುತ್ತಿಗೆಗೆ ಹೋರಾಟ ಸಮಿತಿ ಮುಂದಾಗಿದೆ. ಈ ನಡುವೆ ಎಚ್ಚೆತ್ತುಕೊಂಡಿರುವ ಇಲಾಖೆ ಸರಕಾರ ತಮ್ಮ ಕಡೆಯಿಂದ ಕೈಗೊಳ್ಳಬೇಕಾದ ಸುರಕ್ಷ ಕ್ರಮದ ಬಗ್ಗೆ ಯೋಚಿಸುತ್ತಿದ್ದಾರೆ. ಇದೀಗ ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದು, ಕೆಲವು ಟೆಕ್ನಿಕಲ್ ಸಮಸ್ಯೆ(ತಾಂತ್ರಿಕ ದೋಷ) ಇದೆ. ಅದನ್ನು ಆದಷ್ಟು ಶೀಘ್ರ ಪರಿಹರಿಸುತ್ತೇವೆ ಎಂದಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸುರತ್ಕಲ್ ನಲ್ಲಿರುವ ಟೋಲ್ ಗೇಟ್ ತೆರವಿಗೆ ಹೆದ್ದಾರಿ ಸಚಿವರು ಈಗಾಗಲೇ ಅಧಿಕಾರಿಗಳಿಗೆ ಎಲ್ಲಾ ಅಧಿಕಾರವನ್ನು ಕೊಟ್ಟಿದ್ದಾರೆ. ಅದರಂತೆ ಅಧಿಕಾರಿಗಳು ಕ್ರಮಕೈಗೊಳ್ಳಲಿದ್ದಾರೆ. ಈ ಹಿಂದೆ ರಸ್ತೆ ನಿರ್ಮಾಣ ಮಾಡಿದ್ದು ಒಂದು ಕಂಪೆನಿ ಇದರಿಂದಾಗಿ ಸ್ವಲ್ಪ ಪ್ರಮಾಣದಲ್ಲಿ ಕ್ಲಿಸ್ಟವಾಗಿ ಪರಿಣಮಿಸಿದೆ. ಆದಷ್ಟು ಶೀಘ್ರದಲ್ಲೇ ಇದಕ್ಕೊಂದು ಪರಿಹಾರ ಕಂಡುಕೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.