ಮಂಗಳೂರು, ಸುರತ್ಕಲ್ ನ ನಡುಬೀದಿಯಲ್ಲಿ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಯುವಕನ ತಂದೆ ಫಾರೂಕ್ ಮಾಧ್ಯಮದ ಜೊತೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ನನಗೆ ಪರಿಹಾರ ಅಲ್ಲ ಬದಲಾಗಿ ನ್ಯಾಯಕೊಡಿ ಎಂದು ಅವರು ಆಗ್ರಹಿಸಿದ್ದಾರೆ.

ಮಗನನ್ನು ದುಷ್ಕರ್ಮಿಗಳು ಹತ್ಯೆ ನಡೆಸಿ ಎರಡು ದಿನಗಳಾಗಿವೆ. ಬರ್ಬರವಾಗಿ ಹತ್ಯೆಗೈದ ಸಿಸಿಟಿವಿ ವೀಡಿಯೋಗಳಿವೆ. ವೀಡಿಯೋದಲ್ಲಿ ಆರೋಪಿಗಳ ಮುಖಪತ್ತೆಹಚ್ಚಬಹುದು. ಮತ್ತೊಂದೆಡೆ ಆರೋಪಿಗಳು ಬಂದಿರುವ ಕಾರು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ನೊಂದಣಿ ಸಂಖ್ಯೆ ಮೂಲಕ ಆರೋಪಿಗಳ ಚಹರೆ ಪತ್ತೆಹಚ್ಚಬಹುದು. ಆದರೆ, ಸರಕಾರ ಈ ಕೆಲಸ ನಡೆದಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಸೈಬರ್ ಕ್ರೈಂ ಇದೆ. ಆದರೆ ಯಾಕೆ ಎರಡು ದಿನವಾದ್ರು ಆರೋಪಿಗಳನ್ನು ಬಂಧಿಸಿಲ್ಲ. ಸೈಬರ್ ಕ್ರೈಂ ಹಿಂದೂಗಳಿಗೆ ಮಾತ್ರನಾ ಮುಸಲ್ಮಾನರಿಗಿಲ್ವಾ? ಎಂದು ಮೃತ ಫಾಝಿಲ್ ಅವರ ತಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!