ಮಂಗಳೂರಿನ ಮಳಲಿ ಮಸೀದಿಯ ನವೀಕರಣದ ವೇಳೆ ದೇವಸ್ಥಾನ ಮಾದರಿ ಪತ್ತೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು ಈಗಾಗಲೇ ಜಿಲ್ಲಾ ಕೋರ್ಟ್ ನಲ್ಲಿ ವಿಚಾರಣೆ ಆಗಿದೆ. ಕೋರ್ಟ್ ನಲ್ಲಿ ಯಾವ ತೀರ್ಮಾನ ಬರುತ್ತದೆ ಅದರ ಮೇಲೆ ನಿರ್ಧಾರವಾಗಲಿದೆ ಎಂದರು.
ಪಠ್ಯ ವಿವಾದ ಹಿನ್ನೆಲೆ ರೋಹಿತ್ ಚರ್ಕತೀರ್ಥ ಪಠ್ಯ ಪರಿಷ್ಕರಣೆ ಸದಸ್ಯತ್ವ ವಜಾ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಈಗಾಗಲೇ ಇದರ ಬಗ್ಗೆ ಶಿಕ್ಷಣ ಸಚಿವರಿಗೆ ಸೂಚನೆ ನೀಡಿದ್ದೇನೆ. ನಾಳೆ ಶಿಕ್ಷಣ ಸಚಿವರು ವರದಿ ಕೊಡುತ್ತೇನೆ ಹೇಳಿದ್ದಾರೆ. ವರದಿಯ ಬಳಿಕ ಏನು ಕ್ರಮ ಕೈಗೊಳ್ಳಬೇಕು ಎಂಬುವುದರ ಬಗ್ಗೆ ನಿರ್ಧಾರ ಮಾಡುತ್ತೇನೆ. ಕೆಲವು ಸತ್ಯಂಶಗಳನ್ನು ಸಂಪೂರ್ಣವಾಗಿ ವಿವರಿಸುತ್ತೇನೆ ಎಂದರು.