ಕಾಸರಗೋಡು,(prathidhvani.com) ಬೈಕ್ ಹಾಗೂ ಕಾರಿನ ನಡುವಿನ ಅಪಘಾತವೊಂದರಲ್ಲಿ ವಿದ್ಯಾರ್ಥಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಮೇ 22ರ ರವಿವಾರ ರಾತ್ರಿ ಉಪ್ಪಳದ ಹಿದಾಯತ್ ನಗರಲ್ಲಿ ಸಂಭವಿಸಿದೆ.
ಉಪ್ಪಳ ತುರ್ತಿ ಮಲಬಾರ್ ನಗರದ ಅಬೂಬಕ್ಕರ್ ಇಶಾನ್(19) ಅಪಘಾತದಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿಯಾಗಿದ್ದಾನೆ. ಈತ ಪ್ಲಸ್ ಟು ತರಗತಿಯಲ್ಲಿ ಓದುತ್ತಿದ್ದ.
ವಿದ್ಯಾರ್ಥಿ ಇಶಾನ್ ಬೈಕ್ ನಲ್ಲಿ ತೆರಳುತ್ತಿದ್ದ. ಈ ಸಂದರ್ಭದಲ್ಲಿ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಇಶಾನ್ ನನ್ನು ಆಸ್ಪತ್ರೆಗೆ ತಲುಪಿಸಲಾಯಿತಾದರೂ ಆತನ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ.
ಘಟನೆಯ ಕುರಿತಂತೆ ಮಂಜೇಶ್ವರ ಠಾಣೆಯಲ್ಲಿ ದಾಖಲಾಗಿದೆ.